Sunday, June 21, 2026

Tejas Aircraft Crash: ತೇಜಸ್ ಯುದ್ಧ ವಿಮಾನ ಹಾರಾಟ ಸಂಪೂರ್ಣ ಸ್ಥಗಿತ, ಪರಿಶೀಲನೆಗೆ IAF ಮುಂದು..!

ಬೆಂಗಳೂರು: ಫೆ.7ರಂದು ನಡೆದ ತೇಜಸ್‌ ವಿಮಾನ ಅಪಘಾತ ಘಟನೆಯ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಭಾರತೀಯ ವಾಯುಪಡೆ (IAF) ತೇಜಸ್‌ ನ ಎಲ್ಲಾ ಸಿಂಗಲ್‌ ಸೀಟ್ ವಿಮಾನಗಳ ಬಳಕೆಯನ್ನು ಸ್ಥಗಿತಗೊಳಿಸಿದೆ.

ಇತ್ತೀಚೆಗೆ ತೇಜಸ್‌ ವಿಮಾನದಲ್ಲಿ ಹೆಚ್ಚುತ್ತಿರುವ ಸರಣಿ ಅಪಘಾತಗಳ ಬೆನ್ನಲ್ಲೇ, ತೇಜಸ್‌ ವಿಮಾನವನ್ನು ವ್ಯಾಪಕವಾದ ತಾಂತ್ರಿಕ ಪರಿಶೀಲನೆಗೆ ಒಳಪಡಿಸಲು ವಾಯುಪಡೆ ಮುಂದಾಗಿದ್ದು, ಇದರಿಂದಾಗಿ ಭಾರತೀಯ ವಾಯುಪಡೆಯಲ್ಲಿನ ಸುಮಾರು 30 ಸಿಂಗಲ್-ಸೀಟ್ ತೇಜಸ್ ಜೆಟ್‌ಗಳ ಸಂಪೂರ್ಣ ಫ್ಲೀಟ್ ಗಳ ಬಳಕೆಯನ್ನು ಸ್ಥಗಿತಗೊಳಿಸಿದೆ. ಈ ನಿರ್ಧಾರ ತೇಜಸ್‌ ನ ಮೂರನೇ ವಿಮಾನ ಅಪಘಾತದ ಬಳಿಕ ಬಂದಿದ್ದು, ಸಾಕಷ್ಟು ಕಳವಳವನ್ನು ಹುಟ್ಟಿಸಿದೆ.

2024ರಲ್ಲಿ ಮೊದಲ ಬಾರಿಗೆ ತೇಜಸ್‌ ಜೆಟ್‌ ಜೈಸಲ್ಮೇರ್ ಪ್ರದೇಶದಲ್ಲಿ ಮೊದಲ ಅಪಘಾತ ಸಂಭವಿಸಿತ್ತು. ಫೈರ್‌ ಪವರ್ ಪ್ರದರ್ಶನದಿಂದ ಹಿಂತಿರುಗುತ್ತಿದ್ದಾಗ ವೇಳೆ ಜೈಸೆಲ್ಮೇರ್‌ ನಲ್ಲಿ ತೇಜಸ್‌ ಯುದ್ದವಿಮಾನ ಅಪಘಾತಕ್ಕೀಡಾಗಿದ್ದು, ಈ ಸಮಯದಲ್ಲಿ ಪೈಲಟ್ ಸುರಕ್ಷಿತವಾಗಿ ಹೊರಗೆ ಹಾರಿದ್ದರು.

ಬಳಿಕ ಇತ್ತೀಚೆಗೆ ಕಳೆದ ವರ್ಷ 2025 ನವೆಂಬರ್‌ ತಿಂಗಳಿನಲ್ಲಿ ದುಬೈ ಏರ್ ಶೋನಲ್ಲಿ ನಡೆದ ಏರೋಬ್ಯಾಟಿಕ್ ಪ್ರದರ್ಶನದ ಸಮಯದಲ್ಲಿ ತಾಂತ್ರಿಕ ದೋಷದಿಂದಾಗಿ ತೇಜಸ್‌ ವಿಮಾನ ಪತನಗೊಂಡಿದ್ದು, ಈ ದುರಂತದಲ್ಲಿ ಪೈಲೆಟ್‌ ಸಾವಿಗೀಡಾಗಿದ್ದರು.

ಇದಾದ ಬಳಿಕ ಮತ್ತೆ ಫೆ.7ರಂದು ಮತ್ತೊಂದು ಅಪಘಾತ ಸಂಭವಿಸಿದ್ದು, ಈ ಬೆನ್ನಲ್ಲೇ ಎಚ್ಚೆತ್ತ ಭಾರತೀಯ ವಾಯುಪಡೆ ಸುರಕ್ಷತಾ ದೃಷ್ಟಿಯಿಂದ ತೇಜಸ್‌ ವಿಮಾನಗಳ ತಾಂತ್ರಿಕ ಸ್ಥಿರತೆ ಹಾಗೂ ಸಾಮರ್ಥ್ಯದ ಪರಿಶೀಲನೆಗೆ ಮುಂದಾಗಿದೆ.

ಈ ಕುರಿತು HAL ಸೆಬಿಗೆ ಸ್ಪಷ್ಟನೆ ನೀಡಿದ್ದು, ಅಪಘಾತದ ವರದಿಗಳನ್ನು ನಿರಾಕರಿಸಿದೆ. ಸಣ್ಣ ತಾಂತ್ರಿಕ ಸಮಸ್ಯೆ” ಹೊರತುಪಡಿಸಿ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದೆ.

ತೇಜಸ್ Mk1 ಇತರೆ ಯುದ್ಧ ವಿಮಾನಗಳ ಪೈಕಿ ಅತ್ಯುತ್ತಮ ಸುರಕ್ಷತಾ ದಾಖಲೆಯನ್ನು ಹೊಂದಿದೆ ಎಂದು ಸಂಸ್ಥೆ ಹೇಳಿದೆ.

More like this
Related

ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ ಕೆ ಹರಿಪ್ರಸಾದ್ ಅಧಿಕಾರ ಸ್ವೀಕಾರ

ಬೆಂಗಳೂರು: ನೂತನ ಕೆಪಿಸಿಸಿ ಅಧ್ಯಕ್ಷರಾಗಿರುವ ಬಿಕೆ ಹರಿಪ್ರಸಾದ್ ಅವರು ಭಾನುವಾರ (ಜೂನ್...

ಸುಳ್ಯ| ಮನೆಯ ಸಮೀಪದ ಕೆರೆಗೆ ಬಿದ್ದು ಅವಳಿ ಮಕ್ಕಳು ಮೃತ್ಯು

ಸುಳ್ಯ: ಮನೆಯ ಸಮೀಪದ ಕೆರೆಯ ಬಳಿ ಆಟವಾಡುತ್ತಿದ್ದ ಅವಳಿ ಮಕ್ಕಳು ಆಕಸ್ಮಿಕವಾಗಿ...

ಕರಾವಳಿ ಪ್ರವಾಸೋದ್ಯಮಕ್ಕೆ ಒತ್ತು ಕಾಂಗ್ರೆಸ್ ಸ್ವಾಗತ

ಕುಂದಾಪುರ: ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಒತ್ತು ಕೊಡುವ ಮುಖ್ಯಮಂತ್ರಿ ಡಿ. ಕೆ....

MRG ಗ್ರೂಪ್ ಮಾಲೀಕ ಪ್ರಕಾಶ್ ಶೆಟ್ಟಿಯಿಂದ ಐಷಾರಾಮಿ ‘ಎಂಬ್ರೇಯರ್ ಲೆಗಸಿ 650’ ಖಾಸಗಿ ಜೆಟ್ ಖರೀದಿ!

ಮಂಗಳೂರು: ಎಂಆರ್ಜಿ ಸಮೂಹದ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್...

Copying is disabled on Udupi Digital News.