Saturday, June 13, 2026

ಪಾನಮತ್ತ ಪೈಲಟ್ ವಿರುದ್ಧ ಜ.26ರೊಳಗೆ ಕ್ರಮ ಕೈಗೊಳ್ಳಿ: ಏರ್ ಇಂಡಿಯಾಗೆ ಕೆನಡಾ ಸೂಚನೆ

ಹೊಸದಿಲ್ಲಿ: ದೇಶದ ಕಾನೂನನ್ನು ಉಲ್ಲಂಘಿಸಿ 2025ರ ಡಿಸೆಂಬರ್ 23ರಂದು ವಿಮಾನ ಚಲಾವಣೆಗೆ ಮುನ್ನ ಮದ್ಯಪಾನ ಮಾಡಿದ್ದ ಪೈಲಟ್ ವಿರುದ್ಧ ಈ ತಿಂಗಳ 26ರೊಳಗೆ ಕ್ರಮ ಕೈಗೊಂಡು ಮಾಹಿತಿ ನೀಡುವಂತೆ ಕೆನಡಾ ಸರ್ಕಾರ ಏರ್ ಇಂಡಿಯಾಗೆ ಸೂಚನೆ ನೀಡಿದೆ.

ಉಸಿರಾಟ ವಿಶ್ಲೇಷಕ ( breathalyser) ಪರೀಕ್ಷೆಯಲ್ಲಿ ಪೈಲಟ್ ಮದ್ಯಪಾನ ಮಾಡಿರುವುದು ದೃಢಪಟ್ಟ ಮರುದಿನವೇ ಟ್ರಾನ್ಸ್ ಪೋರ್ಟ್ ಕೆನಡಾ ಈ ಬಗ್ಗೆ ಏರ್ ಇಂಡಿಯಾಗೆ ಮಾಹಿತಿ ನೀಡಿದ್ದು, ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ತಡೆಯಲು ಇಲಾಖೆಯ ಸುರಕ್ಷಾ ನಿರ್ವಹಣಾ ವ್ಯವಸ್ಥೆಯಡಿ “ಪರಿಹಾರಾತ್ಮಕ ಕ್ರಮ” ಕೈಗೊಳ್ಳುವಂತೆ ಆದೇಶ ನೀಡಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಏರ್ ಇಂಡಿಯಾ, ಪರೀಕ್ಷೆಯಲ್ಲಿ ಪತ್ತೆಯಾದ ಆಲ್ಕೋಹಾಲ್ ಮಟ್ಟ ಸೇರಿದಂತೆ ಕೆನಡಾದಿಂದ ಬ್ರೀಥಲೈಸರ್ ಪರೀಕ್ಷೆಯ ವಿವರಗಳನ್ನು ಕೋರಿದೆ ಎಂದು ಡಿಜಿಸಿಎಗೆ ತಿಳಿಸಿದೆ.

“ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್ಸಿಎಂಪಿ) ನೀಡಿದ ಮಾಹಿತಿಯಂತೆ ಕ್ಯಾಪ್ಟನ್ ಅವರು ಏರ್ ಇಂಡಿಯಾ ವಿಮಾನ ಎಐ 186ಗೆ ಡಿಸೆಂಬರ್ 23ರಂದು ಕರ್ತವ್ಯಕ್ಕೆ ಹಾಜರಾಗುವ ಮುನ್ನ ಆಲ್ಕೋಹಾಲ್ ಸೇವಿಸಿರುವುದು ಪತ್ತೆಯಾಗಿದ್ದು, ಕರ್ತವ್ಯಕ್ಕೆ ಸೂಕ್ತವಲ್ಲ ಎಂದು ನಿರ್ಧರಿಸಲಾಗಿತ್ತು. ವ್ಯಾಂಕೋವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಸಿದ ಬಿಎ ಪರೀಕ್ಷೆಯಲ್ಲಿ ಇದು ದೃಢಪಟ್ಟಿದ್ದು, ವಿಮಾನದಿಂದ ಹೊರ ತೆರಳುವಂತೆ ಸೂಚಿಸಲಾಗಿತ್ತು. ಇದು ಕೆನಡಾದ ವೈಮಾನಿಕ ನಿಬಂಧನೆಗಳಿಗೆ ವಿರುದ್ಧ ಎಂದು ನಿರ್ಧರಿಸಲಾಗಿದ್ದು, ಇದು ಟಿಸಿಸಿಎ ನೀಡುವ ಏರ್ ಇಂಡಿಯಾದ ವಿದೇಶಿ ವಿಮಾನ ಆಪರೇಟರ್ ಸರ್ಟಿಫಿಕೆಟ್ ಗೆ ಕೂಡಾ ವಿರುದ್ಧ ಎಂದು ನಿರ್ಧರಿಸಲಾಗಿದೆ” ಎಂದು ಏರ್ ಇಂಡಿಯಾಗೆ ಬರೆದ ಪತ್ರದಲ್ಲಿ ಹೇಳಲಾಗಿದೆ.

More like this
Related

ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ತಮಿಳುನಾಡು ಸಿಎಂ ವಿಜಯ್ ಭೇಟಿ, ವಿಶೇಷ ಪೂಜೆ ಸಲ್ಲಿಕೆ

ಉಡುಪಿ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಶುಕ್ರವಾರ ಕೊಲ್ಲೂರು ಶ್ರೀ ಮೂಕಾಂಬಿಕಾ...

ಭಾರತದಲ್ಲಿ ಭೀತಿ ಸೃಷ್ಟಿಸಲು ದಾವೂದ್ ಗ್ಯಾಂಗ್‌ನಿಂದ ಟಾರ್ಗೆಟ್ ಹತ್ಯೆಗಳ ಸಂಚು; ಗುಪ್ತಚರ ಸಂಸ್ಥೆಗಳ ಎಚ್ಚರಿಕೆ

ನವದೆಹಲಿ: ದಾವೂದ್ ಇಬ್ರಾಹಿಂ ಸಿಂಡಿಕೇಟ್ ಭಾರತದಲ್ಲಿ ಭೀತಿ ಮತ್ತು ಆತಂಕದ ವಾತಾವರಣ...

ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ತಮಿಳುನಾಡು ಸಿಎಂ ವಿಜಯ್ ಭೇಟಿ; ಭದ್ರತೆ ಕಟ್ಟು ನಿಟ್ಟಿನದು

ಮಂಗಳೂರು: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಶುಕ್ರವಾರ ಕರ್ನಾಟಕದ ಉಡುಪಿ...

ಅಹಮದಾಬಾದ್ ವಿಮಾನ ದುರಂತ: 72 ಗಂಟೆಗಳ ತುರ್ತು ಕಾರ್ಯಾಚರಣೆ, ವಾರಗಳ ಕಾಲ ನಡೆದ ಡಿಎನ್‌ಎ ಗುರುತಿನ ಪ್ರಕ್ರಿಯೆ

ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದ ಮೊದಲ ವರ್ಷದ ಹಿನ್ನೆಲೆಯಲ್ಲಿ, ಅಹಮದಾಬಾದ್...

Copying is disabled on Udupi Digital News.