Monday, September 14, 2026

ಮಾಜಿ ಬಸ್ ಕಂಡಕ್ಟರ್ ಅಂಕೇಗೌಡರಿಗೆ ಪದ್ಮಶ್ರೀ

ನವದೆಹಲಿ: ಮೈಸೂರಿನಲ್ಲಿ ವಿಶ್ವದ ಅತಿದೊಡ್ಡ ಉಚಿತ ಪ್ರವೇಶದ ಗ್ರಂಥಾಲಯವನ್ನು ಸ್ಥಾಪಿಸಿದ ಮಾಜಿ ಬಸ್ ಕಂಡಕ್ಟರ್ ಹಾಗೂ ಪುಸ್ತಕ ಪ್ರೇಮಿ ಎಂ. ಅಂಕೇಗೌಡ ಸೇರಿದಂತೆ ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 45 ಸಾಧಕರನ್ನು ಈ ಬಾರಿಯ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಈ ಹಿಂದೆ ಬಸ್ ಕಂಡಕ್ಟರ್ ಆಗಿದ್ದ ಅಂಕೇಗೌಡರು, ಪುಸ್ತಕಗಳೇ ತಮ್ಮ ಜೀವನದ ಕೇಂದ್ರಬಿಂದು ಎಂದುಕೊಂಡು, 20ಕ್ಕೂ ಹೆಚ್ಚು ಭಾಷೆಗಳಲ್ಲಿ ಎರಡು ದಶಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಹೊಂದಿರುವ ‘ಪುಸ್ತಕ ಮನೆ’ ಎಂಬ ವಿಶ್ವದ ಅತಿದೊಡ್ಡ ಉಚಿತ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ. ಮಂಡ್ಯದ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯಲ್ಲಿ ಇರುವ ಈ ಗ್ರಂಥಾಲಯವನ್ನು ಸಾರ್ವಜನಿಕರಿಗೆ ಸಂಪೂರ್ಣ ಉಚಿತವಾಗಿ ತೆರೆದಿಟ್ಟಿದ್ದಾರೆ.

ಪುಸ್ತಕಗಳ ಜೊತೆಗೆ ನಾಣ್ಯಗಳು, ಅಂಚೆಚೀಟಿಗಳು ಹಾಗೂ ಅಪರೂಪದ ಲಗ್ನಪತ್ರಿಕೆಗಳ ವಿಶಿಷ್ಟ ಸಂಗ್ರಹವನ್ನೂ ಅಂಕೇಗೌಡರು ಹೊಂದಿದ್ದಾರೆ. ತಮ್ಮ ಸಂಬಳದ ಬಹುಪಾಲನ್ನು ಪುಸ್ತಕ ಸಂಗ್ರಹಕ್ಕೆ ಮೀಸಲಿಟ್ಟ ಅವರು, ಪುಸ್ತಕಗಳಿಗಾಗಿ ನಿವೇಶನವನ್ನೂ ಮಾರಿದ ಉದಾಹರಣೆ ಗ್ರಾಮೀಣ ಪುಸ್ತಕ ಪ್ರಿಯರಿಗೆ ಅಪಾರ ಸ್ಫೂರ್ತಿಯಾಗಿದೆ.

ಉದ್ಯಮಿ ಹರಿ ಕೋಡೆ ಅವರು ನಿರ್ಮಿಸಿಕೊಟ್ಟಿರುವ ‘ಪುಸ್ತಕ ಮನೆ’ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಸ್ಥಾನ ಪಡೆದಿದ್ದು, ದೇಶದಾದ್ಯಂತ ಕಲಿಕೆಯನ್ನು ಉತ್ತೇಜಿಸುವ ಅಂಕೇಗೌಡರ ಅನನ್ಯ ಸೇವೆಗೆ ಈ ಬಾರಿಯ ಪದ್ಮಶ್ರೀ ಗೌರವ ಲಭಿಸಿದೆ.

ಅಂಕೇಗೌಡರ ಜೊತೆಗೆ, ಏಷ್ಯಾದ ಮೊದಲ ಎದೆಹಾಲು ಬ್ಯಾಂಕ್ ಸ್ಥಾಪಿಸಿದ ಮುಂಬೈ ಮೂಲದ ಶಿಶುವೈದ್ಯೆ ಡಾ. ಅರ್ಮಿದಾ ಫೆರ್ನಾಂಡಿಸ್, ಮಧ್ಯಪ್ರದೇಶದ ಬುಂದೇಲಿ ಯುದ್ಧಕಲಾ ತರಬೇತುದಾರ ಭಗವಾನದಾಸ್ ರೈಕ್ವಾರ್, ಮಹಾರಾಷ್ಟ್ರದ 90 ವರ್ಷದ ವಿಶಿಷ್ಟ ವಾದ್ಯ ತಯಾರಕ ಭಿಕ್ಲ್ಯಾ ಲಡಾಕ್ಯ ದಿಂಡಾ ಸೇರಿದಂತೆ ಹಲವು ಸಾಧಕರು ಈ ಬಾರಿಯ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

More like this
Related

ಉಡುಪಿ ಉಚ್ಚಿಲ ದಸರಾ-2026 ಆಮಂತ್ರಣ ಪತ್ರಿಕೆ ಬಿಡುಗಡೆ

ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದಲ್ಲಿರುವ ಉಚ್ಚಿಲ ಶ್ರೀಮಹಾಲಕ್ಷ್ಮೀ...

ಕಡಿಯಾಳಿಯಲ್ಲಿ ವಜ್ರಮಹೋತ್ಸವದ ಸಂಭ್ರಮ: ಸಂಕಷ್ಟ ಹರ ಗಣಪತಿಯ ಅದ್ಧೂರಿ ಮೆರವಣಿಗೆ

ಉಡುಪಿ: ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ, ಕಡಿಯಾಳಿ ವತಿಯಿಂದ ಆಯೋಜಿಸಲಾಗಿರುವ 60ನೇ...

ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆ: ಸಮಾಜಘಾತುಕ ಶಕ್ತಿಗಳ ಬಳಕೆ – ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: "ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರ ನಡೆಯುತ್ತಿದ್ದು, ಬಿಜೆಪಿ ಸಮಾಜ ಘಾತುಕ...

ಬಳ್ಳಾರಿ ಚಲೋ ನಡೆಸಿದ್ದ ಬಿಜೆಪಿ ನಾಯಕರಿಗೆ ಶಾಕ್; ಸೋಮಶೇಖರ್ ರೆಡ್ಡಿ, ರೇಣುಕಾಚಾರ್ಯ ಸೇರಿ 22 ಬಿಜೆಪಿ ನಾಯಕರ ಮೇಲೆ FIR

ಬಳ್ಳಾರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರವನ್ನು ಖಂಡಿಸಿ...

Copying is disabled on Udupi Digital News.