ಉಡುಪಿ: 18 ವರ್ಷಗಳಿಂದ ದಂತ ಚಿಕಿತ್ಸಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆನಂದ್ ದಂತ ಮತ್ತು ವಕ್ರದಂತ ಚಿಕಿತ್ಸಾಲಯ ಇದರ ನೂತನ ಕ್ಲಿನಿಕ್ ಉಡುಪಿ ಜಿಲ್ಲಾ ನ್ಯಾಯಾಲಯ ಇದರ ಹಿಂಬದಿ ರಸ್ತೆಯಲ್ಲಿ, ಭಾನುವಾರ ಆಗಸ್ಟ್ 23ರಂದು ಉದ್ಘಾಟನೆಗೊಂಡಿತು.

ಕಾರ್ಯಕ್ರಮದಲ್ಲಿ ಹಿರಿಯ ದಂತ ವೈದ್ಯರಾದ ಡಾ. ಯು. ವೆಂಕಟರಾಜ್, ನೋಟರಿ ಹಾಗೂ ಹಿರಿಯ ವಕೀಲರಾದ ದಿವಾಕರ್ ಎಂ. ಶೆಟ್ಟಿ, ನ್ಯೂ ಸಿಟಿ ಆಸ್ಪತ್ರೆ, ಉಡುಪಿಯ ವೈದ್ಯಕೀಯ ನಿರ್ದೇಶಕರಾದ ಡಾ. ರಮೇಶ್ ನಾಯಕ್, ಹಿರಿಯ ದಂತ ವೈದ್ಯರಾದ ಡಾ. ಬಿ. ದಾಮೋದರ ಪೈ ಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ಲಿನಿಕ್ ನ ಯಶಸ್ಸಿಗೆ ಹಾರೈಸಿದರು.

ಕ್ಲಿನಿಕ್ನ ವೈದ್ಯರಾದ ಡಾ. ಪ್ರವೀಣ್ ಶೆಟ್ಟಿ ಕೊಡ್ಲಾಡಿ (ಆರ್ಥೋಡೊಂಟಿಸ್ಟ್),ಡಾ. ರಮಾ ಪ್ರವೀಣ್ ಶೆಟ್ಟಿ ಚಿಕಿತ್ಸಾಲಯದ ಸೌಲಭ್ಯಗಳನ್ನು ವಿವರಿಸಿದರು.




