Monday, June 15, 2026

ಕುಂದಾಪುರ: ಬೈಕ್ ಕಳವು ಆರೋಪಿ ಬಂಧನ

ಕುಂದಾಪುರ: ಕಳೆದ ಮಾರ್ಚ್ ತಿಂಗಳಲ್ಲಿ ನಗರದ ಮನೆಯೊಂದಕ್ಕೆ ಕನ್ನ ಹಾಕಿ ನಗದು ಅಪಹರಣ ಮಾಡಿದ ಹಾಗೂ ಬೈಕ್ ಕಳವು ಮಾಡಿದ ಗುಜರಾತ್ ರಾಜ್ಯದ ಅಮ್ರೇಲಿ ಜಿಲ್ಲೆಯ, ಸಾವರ್‌ ಕುಂಡ್ಲ ತಾಲ್ಲೂಕಿನ ಲಾಲಾಜಿಬಾಯ್ ಬುದಾಬಾಯ್‌ (37) ಎಂಬಾತನನ್ನು ಬಂಧಿಸಿ ಆತನಿಂದ ಕಳವು ಸೊತ್ತು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ:
ಮಾ.18 ಮತ್ತು 19 ರ ಮದ್ಯಾವಧಿಯಲ್ಲಿ ಸಂಗಮ್‌ ಜಂಕ್ಷನ್‌ ಹತ್ತಿರದ ಜೆಎಮ್‌ಜೆ ವಿಲ್ಲಾ ಎಂಬ ಮನೆಯ ಎದುರಿನ ಬಾಗಿಲಿನ ಚೀಲಕವನ್ನು ಮುರಿದು ಮನೆಯ ಒಳಗೆ ಪ್ರವೇಶಿಸಿ ಮನೆಯಲ್ಲಿದ್ದ ಕಪಾಟಿನ ಬೀಗ ತೆಗೆದು ಕಪಾಟಿನಲ್ಲಿಟ್ಟಿದ್ದ ₹10,000 ನಗದು ಕಳವು ಮಾಡಿರುವ ಹಾಗೂ ಅದೇ ದಿನ ನಗರದ ವಿನಯ್‌ ಆಸ್ಪತ್ರೆಯ ಸಮೀಪದ ಪಾರ್ಕಿಂಗ್‌ ಸ್ಥಳದಲ್ಲಿ ಇರಿಸಿದ್ದ ಅಂದಾಜು ₹20,000 ಮೌಲ್ಯದ ಮೋಟಾರು ಸೈಕಲ್ ಕಳವು ಮಾಡಿರುವ ಕುರಿತು ಪ್ರತ್ಯೇಕ ದೂರುಗಳು ದಾಖಲಾಗಿತ್ತು.

ಡಿವೈಎಸ್‌ಪಿ ಹೆಚ್.ಡಿ.ಕುಲಕರ್ಣಿ, ಪೋಲೀಸ್ ನಿರೀಕ್ಷಕರಾದ ಜಯರಾಮ್‌ ಡಿ ಗೌಡ ಅವರ ನಿರ್ದೇಶನದಂತೆ ಉಪ ನಿರೀಕ್ಷಕರಾದ ನಂಜಾ ನಾಯ್ಕ್‌, ಪುಷ್ಪ ಹಾಗೂ ಸಿಬ್ಬಂದಿಗಳಾದ ಮೋಹನ್, ಸಂತೋಷ, ಪ್ರೀನ್ಸ್‌, ಮಹಾಬಲ ಶೆಟ್ಟಿಗಾರ, ಸಂತೋಷ ದೇವಾಡಿಗ, ಘನಶ್ಯಾಮ್‌ ಅವರುಗಳಿದ್ದು ತಂಡ ಕಾರ್ಯಚರಣೆ ನಡೆಸಿ, ಮುರ್ಡೇಶ್ವರದಲ್ಲಿ ಆತನನ್ನು ಬಂಧಿಸಿ, ಆತನಿಂದ ಕಳವು ಮಾಡಿದ ಬೈಕ್ ವಶಪಡಿಸಿಕೊಳ್ಳಲಾಗಿದೆ.

More like this
Related

ಮೋಸದಾಟಗಳಿಂದ ಚುನಾವಣೆ ಸೋಲು: ಕೆ. ಜಯಪ್ರಕಾಶ್ ಹೆಗ್ಡೆ

ವಂಡ್ಸೆಯಲ್ಲಿ ಕಾಂಗ್ರೆಸ್‌ನಿಂದ ಎಸ್‌ಐಆರ್ ಮತದಾರ ಪರಿಷ್ಕರಣೆ ತರಬೇತಿ ಕಾರ್ಯಕ್ರಮ ಕುಂದಾಪುರ: ದೇಶದ ವಿವಿಧ...

ವಿಕೇಂದ್ರೀಕರಣ ವ್ಯವಸ್ಥೆಯ ಅಪರೂಪದ ಚಿಂತಕ ಎಸ್.ಜನಾರ್ದನ್ ಮರವಂತೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ: ವಿಕೇಂದ್ರೀಕರಣ ವ್ಯವಸ್ಥೆಯನ್ನು ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸಲು ಜೀವನವನ್ನೇ ಮುಡಿಪಾಗಿಟ್ಟ ಅಪರೂಪದ ವ್ಯಕ್ತಿಗಳಲ್ಲಿ...

ಕೊಲ್ಲೂರು ದೇವಳಕ್ಕೆ ಮುಕೇಶ್ ಅಂಬಾನಿ ಅವರ ಪುತ್ರ ಅನಂತ ಅಂಬಾನಿ ಭೇಟಿ, ವಿಶೇಷ ಪ್ರಾರ್ಥನೆ

ಕುಂದಾಪುರ: ರಿಲಾಯನ್ಸ್ ಗ್ರೂಪ್ನ ಮುಕೇಶ್ ಅಂಬಾನಿ ಅವರ ಪುತ್ರ ಅನಂತ ಅಂಬಾನಿ...

ಕನ್ನಡ ಶಾಲೆಗಳ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು: ಈಶ ವಿಠಲದಾಸ ಸ್ವಾಮೀಜಿ ಕರೆ

ಪ್ರಸಾದ್ ರಾಜ್ ಕಾಂಚನ್‌ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ, ಎಸ್‌ಎಸ್‌ಎಲ್‌ಸಿ- ಪಿಯುಸಿ...

Copying is disabled on Udupi Digital News.